ನವದೆಹಲಿ/ಕರಾಚಿ : ಭಾರತ ತನ್ನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಮತ್ತೂ ತೀವ್ರವಾಗಿ ಮುಂದುವರೆಸಿದೆ. ಗುರುವಾರ ರಾತ್ರಿಯಿಂದ ಪಾಕಿಸ್ತಾನ ತನ್ನ ಬುದ್ದಿಗೇಡಿತನಕ್ಕೆ ಪಶ್ಚಾತ್ತಾಪ ಪಡುವಂತೆ ಭಾರತ ಪ್ರತಿಕ್ರಿಯೆ ನೀಡಿದ್ದು, ತುಸುವೂ ವಿಶ್ರಮಿಸಿಕೊಳ್ಳಲೂ ಬಿಡದೆ ಪಾಕಿಸ್ತಾನಿ ಪಡೆಗಳನ್ನು ಕುಟ್ಟಿ ಪುಡಿ ಮಾಡುತ್ತಿದೆ.
ಗುರುವಾರ ನಡೆದ ಘಟನಾವಳಿಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ಶೆಲ್ ದಾಳಿಯ ಪರಿಣಾಮ ಬ್ಲಾಕ್ ಔಟ್ ಘೋಷಿಸಲಾಯಿತು. ಇಡೀ ನಗರವೇ ತುಸು ಹೊತ್ತಿನಲ್ಲಿಯೇ ಕತ್ತಲೆಯಲ್ಲಿ ಮುಳುಗಿತು. ಇದೇ ವೇಳೆ ಪಂಜಾಬ್ ನಲ್ಲಿ ನಡೆಯುತಿದ್ದ ಐಪಿಎಲ್ ಪಂದ್ಯಾವಳಿಯನ್ನೂ ಸಹ ಅರ್ಧಕ್ಕೇ ಸ್ಥಗಿತಗೊಳಿಸಲಾಯಿತು.
ಕರಾಚಿ ಬಂದರಿನ ಮೇಲೆ ದಾಳಿ ನಡೆಸಿದ ಭಾರತದ ನೌಕಾಪಡೆ ಐಎನ್ಎಸ್ ವಿಕ್ರಾಂತ್ ನೆರವಿನಿಂದ ಬಂದರನ್ನು ಪುಡಿಪುಡಿ ಮಾಡಿತು.
ಭಾರತೀಯ ಸೇನೆಯೂ ಪಾಕ್ನ ದಾಳಿಗೆ ಪ್ರತ್ಯುತ್ತರ ನೀಡಿದ್ದಲ್ಲದೇ, ಓರ್ವ ಪಾಕ್ ಪೈಲಟ್ ಅನ್ನು ಜೀವಂತವಾಗಿ ಸೆರೆಹಿಡಿದೆ ಎಂದು ತಿಳಿದುಬಂದಿದೆ. ರಾಜಸ್ಥಾನದ ಜೈಸಲ್ಮೇರ್ನಲ್ಲಿ ಪಾಕಿಸ್ತಾನಿ ಪೈಲಟ್ ಅನ್ನು ಭಾರತ ಜೀವಂತವಾಗಿ ಲಾಕ್ ಮಾಡಿದೆ ಎಂದು ವರದಿಯಾಗಿದೆ. ಜೈಸಲ್ಮೇರ್ ಮತ್ತು ಅಖ್ನೂರ್ನ ಈ ಪ್ರದೇಶದ ಮಧ್ಯದಲ್ಲಿ ಪಾಕ್ ಪೈಲಟ್ ಸೆರೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಈಗಾಗಲೇ F-16, F-17 ಎಂಬ ಪಾಕ್ ಫೈಟರ್ ಜೆಟ್ ಗಳನ್ನು ಭಾರತೀಯ ವಾಯು ಸೇನೆ ಬೂದಿ ಮಾಡಿದೆ. ಇನ್ನು ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ದಾಳಿ ನಡೆಸಿ ಧ್ವಂಸಗೊಳಿಸಿತು.
ಸಾಲದೆಂಬಂತೆ ಪಾಕಿಸ್ತಾನದ ಕ್ವೆಟ್ಟಾ ಪ್ರದೇಶವನ್ನು ಬಲೂಚಿಸ್ತಾನ್ ಪ್ರತ್ಯೇಕತಾವಾದಿಗಳು ವಶಕ್ಕೆ ಪಡೆದಿದ್ದು, ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆಯೆಳೆದು ಉಪ್ಪು ಸುರಿದಂತಾಗಿದೆ. ಪ್ರಧಾನಿ ಶಹಬಾಜ್ ಷರೀಫ್ ಮನೆಯ ಸಮೀಪದಲ್ಲಿಯೇ ಶೆಲ್ ದಾಳಿ ನಡೆಯುತ್ತಿರುವುದು ಪಾಕಿಸ್ತಾನದ ಭದ್ರತಾ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ.