ಜಮ್ಮುಕಾಶ್ಮೀರ : ಪಾಕಿಸ್ತಾನದ ವಿರುದ್ದ ಭಾರತವು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ಏರ್ ಸ್ಟ್ರೈಕ್ ಜಾರಿಗೊಳಿಸಿದೆ. ಇದೇ ವೇಳೆ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಏಳು ಮಂದಿ ಉಗ್ರರನ್ನು ಭಾರತದ ಗಡಿ ರಕ್ಷಣಾ ಪಡೆಯ ಯೋಧರು ಕೊಂದುಹಾಕಿದ್ದಾರೆ.
#WATCH | On 8-9 May 2025, BSF foiled a major infiltration bid at the International Boundary in Samba district, J&K by killing at least seven terrorists and causing extensive damage to the Pakistan Post Dhandhar, says BSF.
(Source: BSF) pic.twitter.com/c2MWOUuvQs
— ANI (@ANI) May 9, 2025
ಪಾಕಿಸ್ತಾನ ತನ್ನ ಕೊನೆಯ ಪ್ರಯತ್ನವೆಂಬಂತೆ ಚೀನಾ ನಿರ್ಮಿತ ಡ್ರೋಣ್ ಗಳನ್ನು ಬಳಸಿ ಭಾರತದ ಮೇಲೆ ದಾಳಿಯೆಸಗಲು ಯತ್ನಿಸಿದ್ದು, ಭಾರತವು 50 ಕ್ಕೂ ಹೆಚ್ಚು ಡ್ರೋಣ್ ಗಳನ್ನು ಹೊಡೆದುರುಳಿಸಿದೆ. ಎಲ್ಒಸಿ ಗಡಿಯುದ್ದಕ್ಕೂ ರಾತ್ರಿಯಿಡೀ ಈ ಪ್ರಕ್ರಿಯೆ ನಡೆದಿದೆ.
ಘಟನೆ ಕುರಿತಂತೆ ಗಡಿ ಭದ್ರತಾ ಪಡೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.