ನವದೆಹಲಿ : ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ನನ್ನು ಅಪಹರಿಸಿ ಶಿರಚ್ಛೇದನ ಮಾಡಿ ಹತ್ಯೆಗೈದಿದ್ದ ಪಾಕಿಸ್ತಾನಿ ಉಗ್ರರು ಭಾರತದ ದಾಳಿಯಲ್ಲಿ ಅಸುನೀಗಿದ್ದಾರೆ. ಈ ಸುದ್ದಿ ಇಸ್ರೇಲ್ ನಲ್ಲಿ ಈಗ ಮನೆಮಾತಾಗಿದ್ದು, ಇಸ್ರೇಲಿಗರು ಭಾರತದ ಸಾಹಸವನ್ನು ತುಂಬು ಕಂಠದಿಂದ ಶ್ಲಾಘಿಸಿದ್ದಾರೆ.
2002 ರಲ್ಲಿ ಅಝರ್ ಸೇರಿದಂತೆ ಹಲವು ಉಗ್ರರು ಡೇನಿಯಲ್ ಪರ್ಲ್ ನನ್ನು ಅಪಹರಿಸಿದ್ದರು. ಇದರಲ್ಲಿ ಅಲ್ ಖೈದಾ ಮತ್ತು ಜೈಷ್ ಎ ಮುಹಮ್ಮದ್ ಸಂಘಟನೆಗಳೂ ಸಹ ಕೈಜೋಡಿಸಿದ್ದವು. ಇಸ್ಲಾಂ ಭಯೋತ್ಪಾದಕರ ಎಲ್ಲಾ ಸಂಘಟನೆಗಳೂ ಸಹ ಮುಗಿಬಿದ್ದು ಪತ್ರಕರ್ತ ಡೇನಿಯಲ್ ಪರ್ಲ್ ನ ನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿ ಹತ್ಯೆಗೈದಿತ್ತು.
ನಾನೊಬ್ಬ ಯಹೂದಿ, ನನ್ನ ತಂದೆ ಹಾಗೂ ತಾಯಿ ಸಹ ಯಹೂದಿಗಳು ಎಂದು ಡೇನಿಯಲ್ ಪರ್ಲ್ ಸಾವಿನ ಮುನ್ನ ನೀಡಿದ ಕೊನೆಯ ಹೇಳಿಕೆಯಾಗಿತ್ತು.
ಈ ಕುರಿತು ಇಸ್ರೇಲ್ ನಲ್ಲಿ ಈಗ ಸಾರ್ವಜನಿಕರು ಸಂಭ್ರಮಾಚರಣೆ ಮಾಡುತ್ತಿದ್ದು, ಪಾಕಿಸ್ತಾನ ಯಾವತ್ತೂ ನಮ್ಮ ಜೊತೆಗಿರಲಿಲ್ಲ. ಭಾರತ ಐದು ತಲೆಮಾರಿನಿಂದ ನಮ್ಮ ತಲೆ ಕಾಯುತ್ತಿದೆ. ಭಾರತಕ್ಕೆ ಅಭಿನಂದನೆಗಳು ಎಂದು ಕೊಂಡಾಡಿದ್ದಾರೆ.