ಜಮ್ಮು ಕಾಶ್ಮೀರ : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಭಯೋತ್ಪಾದಕರು ಹಾಗೂ ಅವರ ಬೆಂಬಲಿತ ಸೇನೆಯ ವಿರುದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈ ವೇಳೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸುತ್ತಿರುವ ಪಾಕಿಸ್ತಾನ ಜಮ್ಮುವಿನಲ್ಲಿ ಹಿಂದೂಗಳ ಮನೆಯನ್ನೇ ಗುರಿಯಾಗಿರಿಸಿಕೊಂಡು ದಾಳೆಯೆಸಗುತ್ತಿದೆ.
ಗಡಿಯಲ್ಲಿ ನಡೆಯುತ್ತಿರುವ ಈ ಶೆಲ್ ಹಾಗೂ ಮಿಸೈಲ್ ದಾಳಿಯನ್ನು ತಡಗಟ್ಟುವಲ್ಲಿ ಭಾರತೀಯ ಸೇನೆಯ ಬತ್ತಳಿಕೆಯಲ್ಲಿರುವ ಆಕಾಶ್ ಮಿಸೈಲ್ ಸಿಸ್ಟಂ ಮಹತ್ವದ ಪಾತ್ರ ವಹಿಸುತ್ತಿದೆ.
ASAMAD ಅಥವಾ Akash surface to Air missile defense system ಭಾರತೀಯ ಸೇನೆಯ ಮಹತ್ವದ ಆಯುಧವಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನದ ನೆರವಿನಿಂದಾಗಿ ಭೂಸೇನೆ ಹಾಗೂ ವಾಯುಸೇನೆ ಯ ಯೋಧರು ಶೆಲ್ ಮತ್ತು ಮಿಸೈಲ್ ದಾಳಿಯಿಂದ ರಕ್ಷಿಸಿಕೊಳ್ಳಬಹುದಾಗಿದೆ. ಎಂಥಾ ಕಠಿಣವಾದ ಪ್ರದೇಶ, ಅರಣ್ಯ, ಗುಡ್ಡಗಾಡುಗಳಲ್ಲೂ ಸಹ ಕಾರ್ಯನಿರ್ವಹಿಸಲಬಲ್ಲ ಆಕಾಶ್ ಪ್ರತಿಕೂಲ ಹವಾಮಾನದಲ್ಲಿಯೂ ಸಹ ತನ್ನ ಶಕ್ತಿಯಲ್ಲಿ ಸ್ವಲ್ಪವೂ ಏರುಪೇರಾದಂತೆ ಕ್ಷಮತೆ ಕಾಯ್ದುಕೊಳ್ಳುವ ರೀತಿಯಲ್ಲಿ ರಚಿಸಲ್ಪಟ್ಟಿದೆ.
ಸಂದರ್ಭಕ್ಕೆ ತಕ್ಕಂತೆ ಸಾಮೂಹಿಕವಾಗಿ ಅಥವಾ ಏಕಾಂಗಿಯಾಗಿ ಈ ತಂತ್ರಜ್ಞಾನ ಗಡಿಯುದ್ದಕ್ಕೂ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಗಡಿಯ ತನಕೆ ಬರುವ ಮಿಸೈಲ್ ಅಥವಾ ಶೆಲ್ ಗಳನ್ನು ಮಾರ್ಗಮಧ್ಯದಲ್ಲೇ ಹೊಡೆದುರುಳಿಸುವಷ್ಟು ಪ್ರಬಲ ಶಕ್ತಿ ಹೊಂದಿದೆ.