ಬೆಂಗಳೂರು: ಭಾರತದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಸಿನಿಮಾಗಳು ಸಿಕ್ಕಾಪಟ್ಟೆ ಬಂದು ಹೋಗಿವೆ. ಕಾರ್ಗಿಲ್, ಉರಿ, ಬಾರ್ಡರ್ ಮತ್ತಿತರ ಟೈಟಲ್ನಲ್ಲಿ ಬಂದ ಸಿನಿಮಾಗಳು ಯಶಸ್ಸು ಕಂಡಿದ್ದವು. ಕರ್ನಾಟಕದಲ್ಲೂ ಮುತ್ತಿನಹಾರದಂಥಾ ಅದ್ಭುತ ಚಿತ್ರ ಬಂದಿತ್ತು. ಇದೀಗ ಆಪರೇಷನ್ ಸಿಂಧೂರ್ ಟೈಟಲ್ಗೆ ನಿರ್ಮಾಪಕರು ಮುಗಿಬಿದ್ದಿದ್ದಾರೆ.
ಹಿಂದೂಸ್ತಾನ್ ಕಾ ಸಿಂಧೂರ್, ಮಿಷನ್ ಆಪರೇಷನ್ ಸಿಂಧೂರ್ ಮತ್ತು ಸಿಂಧೂರ್ ಕಾ ಬದ್ಲಾ ಸೇರಿದಂತೆ ಹಲವು ಟೈಟಲ್ಗಳು ರಿಜಿಸ್ಟರ್ ಆಗುತ್ತಿವೆ. ಪಹಲ್ಗಾಮ್: ದಿ ಟೆರರ್ ಅಟ್ಯಾಕ್ ಮತ್ತು ಪಹಲ್ಗಮ್ ಅಟ್ಯಾಕ್ ಮುಂತಾದ ಪಹಲ್ಗಮ್ಗೆ ಸಂಬಂಧಿಸಿದ ಟೈಟಲ್ಗೂ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಮತ್ತೊಂದೆಡೆ ಸ್ಯಾಂಡಲ್ವುಡ್ನಲ್ಲೂ ಆಪರೇಷನ್ ಸಿಂಧೂರ್ ಶೀರ್ಷಿಕೆಗಾಗಿ ಪೈಪೋಟಿ ಶುರುವಾಗಿದೆ. ಕನ್ನಡದ ಹಿರಿಯ ನಿರ್ಮಾಪಕ ಸಾ.ರಾ ಗೋವಿಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಆಪರೇಷನ್ ಸಿಂಧೂರ್ ಟೈಟಲ್ಗೆ ಅರ್ಜಿ ಸಲ್ಲಿಸಿ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದಾರೆ.
ಬಾಲಿವುಡ್ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮಹಾವೀರ್ ಜೈನ್ ಕಂಪನಿ, ಟಿ ಸೀರಿಸ್, ಝೀ ಸ್ಟುಡಿಯೋಸ್, ನಿರ್ದೇಶಕರಾದ ಮಧುರ್ ಭಂಡಾರ್ಕರ್, ಅಶೋಕ್ ಪಂಡಿತ್ ಸಹ ಟೈಟಲ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.