ನವದೆಹಲಿ: ಸೊಳ್ಳೆ ಬತ್ತಿಯಿಂದಾದ ಅವಘಡದಿಂದ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್ನಲ್ಲಿ ನಡೆದಿದೆ.
ರಾತ್ರಿ ಮಲಗುವಾಗ ಉರಿಸಿದ್ದ ಸೊಳ್ಳೆ ಬತ್ತಿ ಬಟ್ಟೆಯ ಮೇಲೆ ಬಿದ್ದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಬಟ್ಟೆ ಹೊತ್ತಿ ಉರಿದಾಗ ಮನೆಯಿಡೀ ತುಂಬಿದ್ದ ವಿಷಮಿಶ್ರಿತ ಗಾಳಿ ಸೇವಿಸಿ ಈ ಕುಟುಂಬದ ಸದಸ್ಯರು ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಬೆಂಕಿ ಹೊತ್ತಿ ಉರಿದಾಗ ಬಿಡುಗಡೆಯಾದ ಕಾರ್ಬನ್ ಮೊನಾಕ್ಸೈಡ್ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಮೃತಪಟ್ಟ 6 ಜನರಲ್ಲಿ 4 ಮಂದಿ ಪುರುಷರು, ಒಬ್ಬ ಮಹಿಳೆ ಮತ್ತೊಂದು ಮಗು ಸೇರಿದೆ.