Monday, April 21, 2025
Homeಟಾಪ್ ನ್ಯೂಸ್Waqf Dispute : ಬೊಮ್ಮಾಯಿ ಕಾಲದಲ್ಲೂ ರೈತರಿಗೆ ನೋಟಿಸ್- ಸಚಿವ ಜಮೀರ್ ಅಹ್ಮದ್

Waqf Dispute : ಬೊಮ್ಮಾಯಿ ಕಾಲದಲ್ಲೂ ರೈತರಿಗೆ ನೋಟಿಸ್- ಸಚಿವ ಜಮೀರ್ ಅಹ್ಮದ್

ಹಾವೇರಿ : ಸದ್ಯ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ರೈತರ ಜಮೀನು ಬಗ್ಗೆ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂಬ ವಿವಾದ ಭಾರೀ ಸದ್ದು ಮಾಡುತ್ತಿದ್ದು, ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.

ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಇಲಾಖೆಯ ಸಚಿವ ಜಮೀರ್ ಅಹ್ಮದ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲೂ ರೈತರಿಗೆ ನೋಟಿಸ್ ಕೊಡಲಾಗಿದೆ. 2019-23ರವರೆಗ ಎಷ್ಟು ರೈತರಿಗೆ ನೋಟಿಸ್​ ಕೊಟ್ಟಿದ್ದಾರೆ. ಈ ಬಗ್ಗೆ ನ.4ರಂದು ಎಲ್ಲಾ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.

ಇನ್ನು 2008 ರಿಂದ 2013ರವರೆಗೆ ನೂರಾರು ಅಲ್ಲ ಸಾವಿರಾರು ನೋಟಿಸ್ ರೈತರಿಗೆ ಕೊಟ್ಟಿದ್ದಾರೆ. 2008 ರಿಂದಲೇ ಈ ಪದ್ಧತಿ ನಡೆದಿದೆ. ನಾನೂ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿರುವೆ, ರೈತರ ಬಗ್ಗೆ ಕಾಳಜಿ ಇದೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಹೆಚ್ಚಿನ ಸುದ್ದಿ

error: Content is protected !!