Wednesday, August 19, 2026
Homeಟಾಪ್ ನ್ಯೂಸ್KARNTAKA WEATHER : ಇದು ಮಳೆಗಾಲ ಏನ್ರೀ? - 38.2 ಡಿಗ್ರಿಗೆ ತಲುಪಿದ ತಾಪಮಾನ; ಜುಲೈ...

KARNTAKA WEATHER : ಇದು ಮಳೆಗಾಲ ಏನ್ರೀ? – 38.2 ಡಿಗ್ರಿಗೆ ತಲುಪಿದ ತಾಪಮಾನ; ಜುಲೈ 19ರವರೆಗೆ ಬಿಸಿಲು ಇನ್ನೂ ಜಾಸ್ತಿ!

ಬೆಂಗಳೂರು: ರಾಜ್ಯದಲ್ಲಿ (Karnataka) ಹವಾಮಾನ (Weather) ವೈಪರೀತ್ಯ ಉಂಟಾಗಿದ್ದು, ಮುಂಗಾರು ಮಳೆ (Rain) ಸುರಿಯಬೇಕಿದ್ದ ಈ ಕಾಲದಲ್ಲೂ ಜನ ಕಡುಬೇಸಿಗೆಯಂತಹ ಬಿಸಿಲಿನ (Heat)ಬೇಗೆಯನ್ನು ಅನುಭವಿಸುವಂತಾಗಿದೆ. ಕರ್ನಾಟಕದಾದ್ಯಂತ ದಿನದಿಂದ ದಿನಕ್ಕೆ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಬಿಸಿಲಿನ ತಾಪ ತೀವ್ರವಾಗಿ ಏರಿಕೆಯಾಗುತ್ತಿದೆ

38.2 ಡಿಗ್ರಿ ತಲುಪಿದ ತಾಪಮಾನ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸದ್ಯ 32 ಡಿಗ್ರಿಯಿಂದ ಬರೋಬ್ಬರಿ 38.2 ಡಿಗ್ರಿ ಸೆಲ್ಸಿಯಸ್‌ವರೆಗೆ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಜನರು ಬಿಸಿಲಿಗೆ ತತ್ತರಿಸುತ್ತಿದ್ದಾರೆ. ಪ್ರಮುಖವಾಗಿ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ ಸತತವಾಗಿ ಏರಿಕೆಯಾಗುತ್ತಲೇ ಸಾಗಿದೆ.

ಮುಂದಿನ 5 ದಿನ ತಾಪಮಾನ ಮತ್ತಷ್ಟು ಏರಿಕೆ ಭೀತಿ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಐದು ದಿನಗಳವರೆಗೆ ಅಂದರೆ ಜುಲೈ 19 ರ ತನಕ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ಸಾಮಾನ್ಯಕ್ಕಿಂತ ಇನ್ನೂ 3 ಡಿಗ್ರಿ ಸೆಲ್ಸಿಯಸ್‌ನಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.

ಕರಾವಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 15 ಹಾಗೂ ಜುಲೈ 16ರಂದು ಮುನ್ನೆಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಬಿಸಿಲಿನ ತಾಪ ಹಾಗೂ ಹವಾಮಾನ ಬದಲಾವಣೆ ತೀವ್ರವಾಗಿರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದನ್ನೂ ಓದಿ : ರಾಮಮಂದಿರಕ್ಕೆ ಸಿಇಒ ನೇಮಕ ಪ್ರಸ್ತಾಪ: ಅಯೋಧ್ಯೆ ಸಂತರ ತೀವ್ರ ವಿರೋಧ

ಹೆಚ್ಚಿನ ಸುದ್ದಿ

Change Language »
error: Content is protected !!