ಬೆಂಗಳೂರು : ಕಾಂಗ್ರೆಸ್ ಪಕ್ಷದ ಚುನಾವಣಾ ಕದನ ಕಲಿಗಳ ಹೆಸರು ಹೊರಬಿದ್ದಿದೆ. 124 ಜನರ ಹೆಸರುಳ್ಳ ಪಟ್ಟಿ ಹೊರಬಿದ್ದಿದ್ದು ಇನ್ನು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಕ್ಷೇತ್ರ ಗೊಂದಲದಲ್ಲಿದ್ದ ಸಿದ್ದರಾಮಯ್ಯ ಹೆಸರೂ ಪಟ್ಟಿಯಲ್ಲಿದ್ದು ಅವರು ವರುಣಾ ಕ್ಷೇತ್ರದಿಂದ ಸ್ಪರ್ಧೆಗಿಳಿಯೋದು ಖಚಿತವಾಗಿದೆ.
ಪದೇ ಪದೇ ಕ್ಷೇತ್ರ ಬದಲಾವಣೆಯ ಮಾತುಗಳನ್ನಾಡಿದ್ದ ಸಿದ್ದರಾಮ್ಯ ಕ್ಷೇತ್ರದ ಆಯ್ಕೆಯ ಗೊಂದಲದಲ್ಲಿದ್ರು. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತ ಎಂದುಕೊಳ್ಳುತ್ತಿರುವಾಗಲೇ ಕೋಲಾರದಿಂದ ಸ್ಪರ್ಧೆ ಬೇಡ ಎಂದು ಹೈಕಮಾಂಡ್ ಸಲಹೆ ನೀಡುತ್ತು. ನಂತರ ಕೊಪ್ಪಳ, ಬಾದಾಮಿ, ಕಡೂರು ಹೀಗೆ ಹಲವು ಕ್ಷೇತ್ರಗಳ ಹೆಸರೂ ಕೇಳಿಬಂದಿತ್ತು. ಈ ಎಲ್ಲಾ ಗೊಂದಲಗಳಿಗೆ ಕಾಂಗ್ರೆಸ್ ತೆರೆ ಎಳೆದಿದ್ದು, ಸಿದ್ದರಾಮಯ್ಯ ವರಣಾ ಕ್ಷೇತ್ರದಿಂದಲೇ ಕಣಕ್ಕಿಳಿಯೋದು ಖಚಿತವಾಗಿದೆ
