ಬೆಂಗಳೂರು: ಉಗ್ರರ ಒಂದು ತಪ್ಪಿಗೆ ಇದೀಗ ಪಾಪಿ ಪಾಕಿಸ್ತಾನ ನರಕ ಅನುಭವಿಸುತ್ತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಸದ್ಯ ಯುದ್ಧದ ಸನ್ನಿವೇಶವ ಇರುವುದರಿಂದ ನಟ ಯಶ್ ವಿನಮ್ರ ಮನವಿಯೊಂದನ್ನು ಮಾಡಿದ್ದಾರೆ.
ಇನ್ಸ್ಟಾ ಸ್ಟೋರಿಯಲ್ಲಿ ಪ್ಲೀಸ್… ಹೀಗೆ ಮಾಡಬೇಡಿ ಎಂದು ನಟ ಹೇಳಿಕೊಂಡಿದ್ದು, ದೇಶದ ಸೈನಿಕರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಸ್ಟೋರಿಯಲ್ಲೇನಿದೆ..?; ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಅಚಲ ಶಕ್ತಿ ಮತ್ತು ನಿಖರತೆಗೆ ನಮನಗಳು. ಅವರ ಸೇವೆಗೆ ಕೃತಜ್ಞತೆಯೊಂದಿಗೆ, ನಾವು ಒಗ್ಗಟ್ಟಿನಿಂದ ನಿಂತು ಜವಾಬ್ದಾರಿಯುತವಾಗಿ ವರ್ತಿಸೋಣ. ಹಂಚಿಕೊಳ್ಳುವ ಅಥವಾ ಪ್ರತಿಕ್ರಿಯಿಸುವ ಮೊದಲು, ವಿಶೇಷವಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಪರಿಶೀಲಿಸಿಕೊಳ್ಳಿ. ತಪ್ಪು ಮಾಹಿತಿಯನ್ನು ದಯವಿಟ್ಟು ಶೇರ್ ಮಾಡಬೇಡಿ. ಇದರ ವಿರುದ್ಧದ ನಮ್ಮ ಸಾಮೂಹಿಕ ಹೋರಾಟವು ಭಾರತವನ್ನು ಮತ್ತಷ್ಟು ಬಲಪಡಿಸುತ್ತದೆ. ಜೈ ಹಿಂದ್! ಎಂದಿದ್ದಾರೆ.
— Yash (@TheNameIsYash) May 9, 2025
ಏ.22 ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದಲ್ಲಿದ್ದ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮುಗ್ಧ ನಾಗರಿಕರ ಮೇಲೆ ತನ್ನ ಪರಾಕ್ರಮ ತೋರಿಸಿದೆ. ಇದರಿಂದ ರೊಚ್ಚಿಗೆದ್ದ ಭಾರತ ತಮ್ಮ ಮಿಸೈಲ್ಗಳನ್ನು ಪಾಕಿಸ್ತಾನದ ಕಡೆ ತೂರಿದ್ದು, ಸದ್ಯ ಶತ್ರು ದೇಶದ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ.