Thursday, May 22, 2025
Homeಆಧ್ಯಾತ್ಮHASANAMBA : ಹಾಸನಾಂಬ ಸನ್ನಿಧಿಯಲ್ಲೇ ಸರ್ಕಾರಿ ಸಿಬ್ಬಂದಿ ಹೊಡಿಬಡಿ!- VIDEO ನೋಡಿ

HASANAMBA : ಹಾಸನಾಂಬ ಸನ್ನಿಧಿಯಲ್ಲೇ ಸರ್ಕಾರಿ ಸಿಬ್ಬಂದಿ ಹೊಡಿಬಡಿ!- VIDEO ನೋಡಿ

ಹಾಸನ : ಪ್ರಸಿದ್ಧ ಹಾಸನಾಂಬ ದೇವಸ್ಥಾನದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಯ ನಡುವೆ ಇಂದು ಮಾರಾಮಾರಿ ನಡೆದಿದ್ದು, ದೇವಸ್ಥಾನದ ಆವರಣದಲ್ಲೇ ಅಂಗಿಯ ಕಾಲರ್ ಎಳೆದಾಡಿಕೊಂಡು ಬಡಿದಾಡಿಕೊಂಡಿದ್ದಾರೆ.

ವರ್ಷಕ್ಕೆ ಒಂದು ಬಾರಿ ಮಾತ್ರ ಹಾಸನದ ಶಕ್ತಿ ದೇವತೆ ಹಾಸನಾಂಬೆ ದೇವಸ್ಥಾನದ ಬಾಗಿಲು ತೆಗೆಯುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರನ್ನು ದೇಗುಲಕ್ಕೆ ಕರೆದೊಯ್ಯುವ ವಿಚಾರಕ್ಕೆ ನಾ ಮುಂದು ತಾ ಮುಂದು ಎಂದು ಕಂದಾಯ ಇಲಾಖೆ ಸಿಬ್ಬಂದಿಯು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ದೇವಾಲಯದ ನಿರ್ಗಮನದ ಗೇಟ್ ಬಳಿ ಮಾರಾಮಾರಿ ನಡೆದಿದ್ದು, ಇವರ ಗಲಾಟೆಯನ್ನು ಬಿಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಹೆಚ್ಚಿನ ಸುದ್ದಿ

error: Content is protected !!