Saturday, March 15, 2025
Homeಟಾಪ್ ನ್ಯೂಸ್VIRAL NEWS : ವಿದ್ಯಾರ್ಥಿಗಳ ಮುಂದೆ ಬಸ್ಕಿ ಹೊಡೆದ ಹೆಡ್ ಮಾಸ್ಟರ್ - ಮಕ್ಕಳ ಬದಲು...

VIRAL NEWS : ವಿದ್ಯಾರ್ಥಿಗಳ ಮುಂದೆ ಬಸ್ಕಿ ಹೊಡೆದ ಹೆಡ್ ಮಾಸ್ಟರ್ – ಮಕ್ಕಳ ಬದಲು ತಮಗೆ ತಾವೇ ಶಿಕ್ಷಿಸಿಕೊಂಡ ಶಿಕ್ಷಕ : VIDEO

ಆಂಧ್ರಪ್ರದೇಶ : ಇಲ್ಲಿನ ವಿಜಯನಗರ ಜಿಲ್ಲೆಯ ಬೊಬ್ಬಿಲಿ ಮಂಡಲದ ಪೆಂಟಾ ಝಡ್‌ಪಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಿಂತಾ ರಮಣ ಅವರು ತಮ್ಮ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಟಿತವಾದ ಕಾರಣ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಬದಲು ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮುಂದೆ ತಮ್ಮನ್ನು ತಾವೇ ಶಿಕ್ಷಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಹೌದು, ಈಗ ಕಾಲ ಮೊದಲಿನಂತಿಲ್ಲ.. ಶಾಲೆಯಲ್ಲಿ ಶಿಕ್ಷಕರಾಗಲಿ ಅಥವಾ ಮನೆಯಲ್ಲಿ ಪೋಷಕರಾಗಲಿ ಮಕ್ಕಳನ್ನು ದಂಡಿಸಬೇಕು ಅಂದ್ರೆ ನೂರು ಬಾರಿ ಯೋಚನೆ ಮಾಡಬೇಕು.ಇನ್ನು ಶಿಕ್ಷಕರು ಮೊದಲಿನಂತೆ ಈಗ ವಿದ್ಯಾರ್ಥಿಗಳನ್ನು ದೈಹಿಕವಾಗಿ ಶಿಕ್ಷಿಸಲು ಅವಕಾಶವೇ ಇಲ್ಲ. ಹೀಗಾಗಿ ಮಕ್ಕಳನ್ನು ಸರಿ ದಾರಿಗೆ ತರಲು ಮುಖ್ಯೋಪಾಧ್ಯಾಯರು ತಾವೇ ಈ ರೀತಿ ಮಕ್ಕಳ ಮುಂದೆ ಬಸ್ಕಿ ಹೊಡೆದು ಓದಿನ ಕಡೆ ಗಮನ ಕೊಡುವಂತೆ ವಿದ್ಯಾರ್ಥಿಗಳಲ್ಲಿ ಹೇಳಿದ್ದಾರೆ.

ಈ ಪ್ರೌಢ ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಎಷ್ಟು ಬಾರಿ ವಿದ್ಯಾರ್ಥಿಗಳಲ್ಲಿ ಓದಿನ ಕಡೆ ಗಮನ ಕೊಡಲು ಹೇಳಿದರೂ ಸಹ ಮಕ್ಕಳಲ್ಲಿ ಯಾವುದೇ ಬದಲಾವಣೆ ಬಾರದ ಕಾರಣ, ಅವರ ಮನಸ್ಸನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹೆಡ್ ಮಾಸ್ಟರ್ ಈ ರೀತಿ ಮಾಡಿದ್ದಾರೆ. ಶಿಕ್ಷಕರ ಈ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಈ ರೀತಿಯಾಗಿ ಮಕ್ಕಳನ್ನು ತಿದ್ದುವುದು ಬಹಳ ಉತ್ತಮವಾದ ಯೋಚನೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!