Sunday, January 25, 2026
Homeಟಾಪ್ ನ್ಯೂಸ್ACTOR VIJAY: ಜನ ನಾಯಗನ್‌ ರಿಲೀಸ್‌ಗೆ ತಡೆ ಬೆನ್ನಲ್ಲೇ ನಟ ವಿಜಯ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್

ACTOR VIJAY: ಜನ ನಾಯಗನ್‌ ರಿಲೀಸ್‌ಗೆ ತಡೆ ಬೆನ್ನಲ್ಲೇ ನಟ ವಿಜಯ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್

ಳಪತಿ ವಿಜಯ್ (Actor Vijay) ನಟನೆಯ ‘ಜನನಾಯಗನ್’ (Jana Jayagan) ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ (CBFC’s Certificate) ನೀಡಲಾಗಿಲ್ಲ ಎಂದು ರಿಲೀಸ್ (Release) ದಿನಾಂಕವನ್ನು ದಿಢೀರ್ ಮುಂದೂಡಿಕೆ ಮಾಡಲಾಗಿತ್ತು. ಇದೀಗ ವಿಜಯ್ ಫ್ಯಾನ್ಸ್ ಗೆ ಮತ್ತೊಂದು ಗುಡ್ ನ್ಯೂಸ್ ಹೊರ ಬಿದ್ದಿದೆ.

ಹೌದು.. ದಳಪತಿ ವಿಜಯ್ ತಮ್ಮ ನಟನಾ ವೃತ್ತಿಜೀವನದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ 2016 ರ ಆಕ್ಷನ್ ಚಿತ್ರ ‘ಥೇರಿ’ ಕೂಡ ಒಂದು, ಇದು ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ವಿಜಯ್ ನಟನೆಯ ಕೊನೆಯ ಚಿತ್ರ ವಿಳಂಬವಾಗುತ್ತಿರುವುದರಿಂದ, ‘ಥೇರಿ’ಯ ತಯಾರಕರು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ನಿರ್ಮಾಪಕ ಕಲೈಪುಲಿ ಎಸ್. ಥಾನು ಅವರು ದಳಪತಿ ವಿಜಯ್ ಅವರ ‘ಥೇರಿ’ ಚಿತ್ರ ಮತ್ತೆ ಚಿತ್ರಮಂದಿರಗಳಿಗೆ ಬರಲಿದೆ ಎಂದು ಇಂದು ಘೋಷಿಸಿದ್ದಾರೆ . ಅಟ್ಲೀ ಅವರ ಪವರ್-ಪ್ಯಾಕ್ಡ್ ಎಂಟರ್‌ಟೈನರ್ ಜನವರಿ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

‘ಥೇರಿ’ ಚಿತ್ರವು ತಂದೆ-ಮಗಳ ಬಾಂಧವ್ಯವನ್ನು ತೋರಿಸುವ ಕಥಾಹಂದರದಿಂದಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಮತ್ತು ಬ್ಲಾಕ್‌ ಬಸ್ಟರ್ ಆಗುವಲ್ಲಿ ಯಶಸ್ವಿಯಾಯಿತು. ಸಮಂತಾ ರುತ್ ಪ್ರಭು ಮತ್ತು ಆಮಿ ಜಾಕ್ಸನ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಅಶ್ವಿನಿ, ಧ್ರುವಂತ್‌ಗೆ ಸಿಕ್ತು ಈ ಸೀಸನ್‌ನ ಕೊನೆಯ ಕಿಚ್ಚನ ಚಪ್ಪಾಳೆ- VIDEO

ಅಟ್ಲೀ ನಿರ್ದೇಶನದ ಈ ಚಿತ್ರವು ಡಿಸಿಪಿ ವಿಜಯ ಕುಮಾರ್ ಸುತ್ತ ಸುತ್ತುತ್ತದೆ, ತಮಿಳು ಭಾಷೆಯ ಈ ಚಿತ್ರ ಎಷ್ಟು ಜನಪ್ರಿಯವಾಯಿತು ಎಂದರೆ ಅದನ್ನು ಹಿಂದಿಯಲ್ಲಿ ಬೇಬಿ ಜಾನ್ ಎಂದು ಮರುಸೃಷ್ಟಿಸಲಾಯಿತು, ಇದರಲ್ಲಿ ವರುಣ್ ಧವನ್, ಕೀರ್ತಿ ಸುರೇಶ್, ವಾಮಿಕಾ ಗಬ್ಬಿ, ಜರಾ ಝ್ಯಾನ್ನಾ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ.

ಇನ್ನೂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಜನವರಿ 9 ರಂದು ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಬೇಕಿತ್ತು. ಹಾಗೆಯೇ ನಟ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಜನ ನಾಯಗನ್ ನೋಡೋಕೆ ಎಲ್ಲೆಡೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ದಿಢೀರ್ ಬೆಳವಣಿಗೆಯಿಂದ ಫ್ಯಾನ್ಸ್ ಗೆ ಕೊಂಚ ಆಘಾತವಾಗಿದೆ.‌

ಬೆಳಗ್ಗೆ ನೀಡಿದ್ದ ಆದೇಶಕ್ಕೆ ಮಧ್ಯಾಹ್ನ ತಡೆ: ಕೋರ್ಟ್‌ ಮೆಟ್ಟಿಲೇರಿದ್ದ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ತಂಡಕ್ಕೆ ಶಾಕ್ ಉಂಟಾಗಿದೆ. ಬೆಳಗ್ಗೆ ನೀಡಿದ್ದ ತನ್ನದೇ ಆದೇಶಕ್ಕೆ ಮದ್ರಾಸ್‌ ಹೈಕೋರ್ಟ್  ಮಧ್ಯಾಹ್ನ ತಡೆ ನೀಡಿದೆ.

ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ‘ಜನ ನಾಯಗನ್’ ಸಿನಿಮಾ ಇಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್‌ಸಿ ಪ್ರಮಾಣ ಪತ್ರ ನಿರಾಕರಿಸಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಿತ್ತು. ಇದಕ್ಕೆ ಆಕ್ಷೇಪಿಸಿ ‘ಜನ ನಾಯಗನ್’ ಸಿನಿಮಾದ ನಿರ್ಮಾಪಕರು ಕೋರ್ಟ್‌ ಮೆಟ್ಟಿಲೇರಿದ್ದರು. ಈ ಸಂಬಂಧ ಇಂದು (ಜ.9) ವಿಚಾರಣೆ ನಡೆದಿದ್ದು, ಬೆಳಗ್ಗೆ ಮದ್ರಾಸ್ ಹೈಕೋರ್ಟ್‌ ಏಕಸದಸ್ಯ ಪೀಠ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್‌ಸಿಗೆ ಆದೇಶಿಸಿತ್ತು. ಆದರೆ ಶಾಕ್ ಎಂಬಂತೆ ಮಧ್ಯಾಹ್ನದ ವೇಳೆಗೆ ತನ್ನದೇ ಆದೇಶಕ್ಕೆ ತಡೆ ನೀಡಿದ ಮದ್ರಾಸ್ ಹೈಕೋರ್ಟ್, ಪ್ರಮಾಣ ಪತ್ರ ನೀಡುವಿಕೆಗೆ ತಾತ್ಕಾಲಿಕ ತಡೆ ನೀಡಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!