ದಾವಣಗೆರೆ : ಪುರಸಭೆ ವ್ಯಾಪ್ತಿಗೆ ಬರುವ ವಿವಿಧ ಟೆಂಡರ್ಗಳ ವಿಚಾರಕ್ಕೆ ಕಾಂಗ್ರೆಸ್ ಸದಸ್ಯರ ನಡುವೆ ಮಾರಾಮಾರಿ ನಡೆದ ಘಟನೆ ಹೊನ್ನಾಳಿಯ ಪುರಸಭೆಯಲ್ಲಿ ಇಂದು ನಡೆದಿದೆ.
ಪುರಸಭೆಯಲ್ಲಿ ಸಭೆ ನಡೆಯುವಾಗಲೇ ಸದಸ್ಯರು ಪರಸ್ಪರ ಕೆನ್ನೆ-ಕೆನ್ನೆಗೆ ಬಾರಿಸಿಕೊಂಡು, ಅಂಗಿ ಎಳೆದಾಡಿ ಕಿರಿಕ್ ಮಾಡಿಕೊಂಡಿದ್ದಾರೆ. ಟೆಂಡರ್ ವಿಚಾರಕ್ಕೆ ಹೊನ್ನಾಳಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಗುದ್ದಾಡಿದ್ದಾರೆ.
ಹೊನ್ನಾಳಿಯ ಮಾರ್ಕೆಟ್ ಟೆಂಡರ್, ಕುರಿ ಸಂತೆ ಸೇರಿ ಅನೇಕ ಟೆಂಡರ್ ವಿಚಾರಗಳ ಕುರಿತ ಸಭೆಯಲ್ಲಿ ಪ್ರಸ್ತಾಪವಾಗಿವೆ. ಈ ವೇಳೆ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದ ಆರಂಭವಾಗಿದೆ. ಸ್ಥಾಯಿ ಸಮಿತಿ ಸದಸ್ಯ ಹೊಸಕೆರೆ ಸುರೇಶ್ ಮೇಲೆ ಪುರಸಭೆ ಸದಸ್ಯ ಘಾಡ್ಜೀಲಾ ಸುರೇಶ್ ಕೆನ್ನೆಗೆ ಬಾರಿಸಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿದಾಗ, ಕೆಲ ಸದಸ್ಯರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿದ್ದಾರೆ.
ಆದರೆ ತುಂಬಿದ ಸಭೆಯಲ್ಲಿ ಈ ರೀತಿ ಕಿತ್ತಾಡಿದ್ದೀರಿ.. ನಿಮಗೆ ಜವಾಬ್ದಾರಿ ಇಲ್ಲವೇನು ಎಂದು ಪ್ರಶ್ನಿಸುತ್ತಿರುವ ಜನಸಾಮಾನ್ಯರು, ಪುರಸಭೆ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.