Monday, April 13, 2026
Homeಬೆಂಗಳೂರುಇಂದು ಕೈ ನಾಯಕರ ಸಭೆ – ಅಭ್ಯರ್ಥಿಗಳಿಗೆ ಚುನಾವಣಾ ತಂತ್ರ ತರಬೇತಿ!

ಇಂದು ಕೈ ನಾಯಕರ ಸಭೆ – ಅಭ್ಯರ್ಥಿಗಳಿಗೆ ಚುನಾವಣಾ ತಂತ್ರ ತರಬೇತಿ!

ಸೋಮವಾರ ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಸಾರಥ್ಯದಲ್ಲಿ ಸಭೆ ನಡೆಯಲಿದೆ. ಶನಿವಾರ ಬಿಡುಗಡೆಯಾದ ಪಟ್ಟಿಯಲ್ಲಿ ಸ್ಥಾನಗಳಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ರಣತಂತ್ರದ ಬಗ್ಗೆ ತರಬೇತಿ ಸಹ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಆಡಳಿತಾರೂಢ ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಕೈ ನಾಯಕರಿಗೆ ತರಬೇತಿ ನಡೆಯುತ್ತಿದ್ದು, ಇದರಲ್ಲಿ ಮತದಾರರ ಪ್ರಶ್ನೆಯನ್ನು ಎದುರಿಸುವುದು ಹೇಗೆ, ಕಾಂಗ್ರೆಸ್ ಪ್ರಣಾಳಿಕೆಯನ್ನು ಜನರಿಗೆ ಅರ್ಥೈಸುವುದು ಹೇಗೆ, ಬಿಜೆಪಿಯ ಅಕ್ರಮಗಳನ್ನು ಸಮರ್ಥವಾಗಿ ಜನರೆದುರು ತೆರೆದಿಡುವುದು ಹೇಗೆ ಎಂಬ ಬಗ್ಗೆ ಚುನಾವಣಾ ತಜ್ಞರಿಂದ ಕಾರ್ಯಾಗಾರಗಳು ನಡೆಯಲಿವೆ. ಜೊತೆಗೆ ಶಾಸಕ ಅಭ್ಯರ್ಥಿಯ ವ್ಯಕ್ತಿತ್ವ, ಮಾತುಗಾರಿಕೆ ಹೇಗಿರಬೇಕು. ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ.
ರಾಜ್ಯದ 124 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಇನ್ನು 100 ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಆಯ್ಕೆ ಪ್ರಕ್ರಿಯೆ ಕೈಗೊಂಡಿದೆ. ಖಾಸಗಿ ರೆಸಾರ್ಟ್‍ನಲ್ಲಿ ನಡೆಯುತ್ತಿರುವ . ರಾಜ್ಯ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲಾ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಪಾಲ್ಗೊಳ್ಳಲಿರುವ ಈ ಸಭೆಯಲ್ಲಿ ಅಭ್ಯರ್ಥಿಗಳಿಗೆ ತರಬೇತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!