Tuesday, May 19, 2026
Homeಟಾಪ್ ನ್ಯೂಸ್ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ - 500 ಕುಕ್ಕರ್ ವಶ

ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ – 500 ಕುಕ್ಕರ್ ವಶ

ಬೆಂಗಳೂರು : ಮತದಾರರಿಗೆ ಹಂಚಲು ತಂದಿದ್ದ 504 ಕುಕ್ಕರ್‍ಗಳನ್ನು ವಶಪಡಿಸಿಳ್ಳುವಲ್ಲಿ ಮತದಾರರ ನೋಂದಣಾಧಿಕಾರಿಗಳ ತಂಡ ಸಫಲವಾಗಿದೆ. ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಎಂಬುವವರ ಮನೆಯ ಮೇಲೆ ಹಠಾತ್ ದಾಳಿ ನಡೆಸಿ ಕುಕ್ಕರ್ ವಶಪಡಿಸಿಕೊಳ್ಳಲಾಗಿದೆ.
ಮತದಾರರ ನೋಂದಣಾಧಿಕಾರಿ ವರಲಕ್ಷ್ಮಮ್ಮ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿತ್ತು. ಮತದಾರರರಿಗೆ ಆಮಿಷವೊಡ್ಡಲು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನಿಲ್ ಶೆಟ್ಟಿ, ಈ ಹಿಂದೆ ಶಾಸಕ ರಾಮಲಿಂಗಾರೆಡ್ಡಿ ಹಂಚಿದ್ದ ಕಳಪೆ ಕುಕ್ಕರ್ ಬಗ್ಗೆ ನಾನು ಮಾಧ್ಯಮಗಳಲ್ಲಿ ದನಿಯೆತ್ತಿದ್ದೆ. ಆದರೆ ನೋಂದಣಾಧಿಕಾರಿ ಶಾಸಕರೊಡನೆ ಶಾಮೀಲಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕುಕ್ಕರ್ ಮೇಲಿರುವ ಹೆಸರು ರಾಮಲಿಂಗಾರೆಡ್ಡಿಯವರದ್ದು, ಚಿಹ್ನೆ ಕಾಂಗ್ರೆಸ್ ಪಕ್ಷದ್ದು ಎಂದು ಆರೋಪಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!