Friday, December 5, 2025
Homeದೇಶವಾಮಾಚಾರದ ಆರೋಪ- ವೃದ್ಧ ದಂಪತಿಗಳ ಬರ್ಬರ ಕೊಲೆ

ವಾಮಾಚಾರದ ಆರೋಪ- ವೃದ್ಧ ದಂಪತಿಗಳ ಬರ್ಬರ ಕೊಲೆ

ವಾಮಾಚಾರ ಮಾಡುತ್ತಿದ್ದಾರೆಂಬ ಗುಮಾನಿಯ ಮೇಲೆ ಬುಡಕಟ್ಟು ಜನಾಂಗದ ವೃದ್ಧ ದಂಪತಿಯನ್ನು ದಾರುಣವಾಗಿ ಹೊಡೆದು ಕೊಂದಿರುವ ಘಟನೆ ಪಶ್ಚಿಮಬಂಗಳಾದ ಭಿರ್ಭೂಮ್ ಜಿಲ್ಲೆಯ ಅಹ್ಮದ್ ಪುರದಲ್ಲಿ ನಡೆದಿದೆ. ಪಾಂಡ್ರು ಹೆಂಬ್ರೋಮ್(62) ಮತ್ತು ಪಾರ್ವತಿ ಹೆಂಬ್ರೋಮ್ (52) ಮೃತ ದಂಪತಿಗಳಾಗಿದ್ದಾರೆ.
ವಾಮಾಚಾರದ ಆರೋಪದ ಮೇಲೆ ಈ ಬಡ ದಂಪತಿಗಳನ್ನು ಕೊಂದು ಹಾಕಿದ್ದ ಗ್ರಾಮಸ್ಥರು ಗುಪ್ತವಾಗಿ ಅಂತ್ಯ ಸಂಸ್ಕಾರ ನಡೆಸಲೂ ಸಹ ತಯಾರಿ ನಡೆಸಿದ್ದರು. ಗ್ರಾಮದ ಮುಖ್ಯಸ್ಥನ ನೇತೃತ್ವದಲ್ಲಿ ತಂಡವೊಂದು ಅಂತ್ಯಸಂಸ್ಕಾರಕ್ಕೂ ಸಹ ಸಿದ್ದವಾಗಿತ್ತು. ಆದರೆ ಈ ಬಗ್ಗೆ ತಿಳಿದಿದ್ದ ಕೆಲವು ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ತಡೆಯೊಡ್ಡಿದ್ದಾರೆ. ಈ ವಿವಾದದ ಬಗ್ಗೆ ಪೊಲೀಸರಿಗೆ ಸುದ್ದಿ ತಿಳಿದು ಅವರು ಸ್ಥಳಕ್ಕೆ ಆಗಮಿಸಿದಾಗ ವಿಷಯ ಹೊರಬಂದಿದೆ. ಪ್ರಕರಣದ ತನಿಖೆಯ ಬಗ್ಗೆ ಪೊಲೀಸ್ ಆಯುಕ್ತರಿಗೆ ಆದೇಶಿಸಲಾಗಿದ್ದು, ಸೈಂಥಿಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!