Saturday, January 25, 2025
Homeಟಾಪ್ ನ್ಯೂಸ್ಉತ್ತರ ಕರ್ನಾಟಕದಲ್ಲಿ ಕಂಪಿಸಿದ ಭೂಮಿ

ಉತ್ತರ ಕರ್ನಾಟಕದಲ್ಲಿ ಕಂಪಿಸಿದ ಭೂಮಿ

ಹೊಸಪೇಟೆ: ಉತ್ತರ ಕರ್ನಾಟಕ ಭಾಗದಲ್ಲಿ ಭೂಕಂಪನ ಅನುಭವವಾಗಿದೆ. ರಿಕ್ಟರ್ ಮಾಪನದ ಮೂಲಕ ಭೂಕಂಪನ ದಾಖಲಾಗಿದ್ದು, ಹೊಸಪೇಟೆ ತಾಲೂಕಿನ ಡಣಾಪುರ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಭೂಕಂಪನವಾಗಿದೆ 15- ರಿಂದ 20 ಕಿಮೀ, ರೇಡಿಯಲ್ ವ್ಯಾಪ್ತಿಯಲ್ಲಿ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಭೂಕಂಪನ ತೀವ್ರತೆ ಕಡಿಮೆ ಪ್ರಮಾಣದ್ದಾಗಿದ್ದು, ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಜನರು ಆತಂಕಗೊಳ್ಳಬಾರದೆಂದು ವಿಜಯನಗರ ಜಿಲ್ಲಾಡಳಿತ ಸ್ಥಳೀಯರಲ್ಲಿ ಮನವಿ  ಮಾಡಿದೆ

ಹೆಚ್ಚಿನ ಸುದ್ದಿ

error: Content is protected !!