Thursday, July 10, 2025
Homeಟಾಪ್ ನ್ಯೂಸ್ಸಂದಾನ ಬಿಟ್ಟು ಹೋರಾಟ ರೂಪಿಸಿ : ನಿರ್ಮಲಾನಂದನಾಥ ಶ್ರೀಗಳಿಗೆ ಡಿ.ಕೆ.ಶಿ ಒತ್ತಾಯ

ಸಂದಾನ ಬಿಟ್ಟು ಹೋರಾಟ ರೂಪಿಸಿ : ನಿರ್ಮಲಾನಂದನಾಥ ಶ್ರೀಗಳಿಗೆ ಡಿ.ಕೆ.ಶಿ ಒತ್ತಾಯ

ಒಕ್ಕಲಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದ್ದು ಕೂಡಲೇ ಉರಿ-ನಂಜೇಗೌಡ ವಿಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದ್ರೆ ನಾವು ಒಕ್ಕಲಿಗರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು.

ಬೆಳಗಾವಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಕಳಂಕ ತರಲೆಂದೇ ಉರಿ-ನಂಜೇಗೌಡ ಪಾತ್ರಗಳ ಬಗ್ಗೆ ಬಿಜೆಪಿ ಪದೇ ಪದೇ ಮಾತನಾಡುತ್ತಿದೆ. ಬಿಜೆಪಿ ಸಚಿವರಾಗಿರುವ ಮುನಿರತ್ನ ಈ ಬಗ್ಗೆ ಸಿನಿಮಾ ಮಾಡ್ತೀನಿ ಅಂತಾರೆ. ಇದಕ್ಕೆ ಅಶ್ವತ್ಥನಾರಾಯಣ್ ಚಿತ್ರಕಥೆಯಂತೆ.. ಇದನ್ನೆಲ್ಲಾ ನೋಡಿಯೂ ಸುಮ್ಮನಿರಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಈ ಬಗ್ಗೆ ಪ್ರಚಾರ ಮಾಡುತ್ತಿರುವ ಶೋಭಾ ಕರಂದ್ಲಾಜೆ, ಸಿಟಿ ರವಿ, ಅಶ್ವತ್ಥನಾರಾಯಣ್ ಒಕ್ಕಲಿಗ ವಿರೋಧಿಗಳು ಎಂದ್ರು ಹರಿಹಾಯ್ದರು.

ಪರಮಪೂಜ್ಯರಾದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳು ಸಚಿವರನ್ನು ಕರೆಸಿ ಮಾತನಾಡೋದಾಗಿ ಹೇಳಿದ್ದಾರೆ. ಅವರನ್ನು ಕರೆಯಿಸಿ ಮಾತನಾಡುವುದೇನಿಲ್ಲ.. ಇಂಥ ಕುಕೃತ್ಯಗಳಿಗೆ ಕೈಹಾಬೇಡಿ ಎಂದು ಎಚ್ಚರಿಕೆ ನೀಡಬೇಕು ಎಂದ್ರು. ಈ ಕುರಿತು ನೀವೇ ಮುಖಂಡತ್ವ ವಹಿಸಿ ಹೋರಾಟ ರೂಪಿಸಿ ಎಂದು ಶ್ರೀಗಳನ್ನು ಒತ್ತಾಯಿಸಿದ್ರು. ಒಕ್ಕಲಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮುಂದುವರೆದ್ರೆ ನಮ್ಮ ಸಮುದಾಯದವರು ತೀವ್ರಸ್ವರೂಪವಾದ ಹೋರಾಟ ಮಾಡಬೇಕಾಗುತ್ತೆ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ರು.

ಹೆಚ್ಚಿನ ಸುದ್ದಿ

While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!