Thursday, July 10, 2025
Homeಟಾಪ್ ನ್ಯೂಸ್ಗುಲಾಮರಾಗೋದಕ್ಕಿಂತ ಉರಿಗೌಡ ಎನಿಸಿಕೊಳ್ಳೊದೇ ಲೇಸು: ಸಿಟಿ ರವಿ

ಗುಲಾಮರಾಗೋದಕ್ಕಿಂತ ಉರಿಗೌಡ ಎನಿಸಿಕೊಳ್ಳೊದೇ ಲೇಸು: ಸಿಟಿ ರವಿ

ಚುನಾವಣೆ ಮುಗಿಯುವವರೆಗೂ ಉರಿಗೌಡ ನಂಜೇಗೌಡ ವಿಚಾರ ಅಂತ್ಯವಾಗೋ ರೀತಿ ಕಾಣ್ತಿಲ್ಲ. ಬಿಜೆಪಿ ಮುಖಂಡ ಸಿಟಿ ರವಿ ಮತ್ತೆ ಉರಿಗೌಡನ ವಿಚಾರವೆತ್ತಿದ್ದಾರೆ. ಗುಲಾಮಿ ಮನಸ್ಥಿತಿಯಲ್ಲಿ ಬದುಕುವುದಕ್ಕಿಂತ ಉರಿಗೌಡ- ನಂಜೇಗೌಡ ಎಂದು ಕರೆಸಿಕೊಲ್ಳುವುದೇ ವಾಸಿ ಎಂದಿದ್ದಾರೆ ಸಿಟಿ ರವಿ.

ಉರಿಗೌಡ- ನಂಜೇಗೌಡ ಎಂಬುವವರು ಯಾರೂ ಇಲ್ಲ.. ಇವೆಲ್ಲಾ ಬರೀ ಕಾಲ್ಪನಿಕ ಪಾತ್ರಗಳಷ್ಟೇ. ಉರಿ- ನಂಜೇಗೌಡ ಮತ್ಯಾರೂ ಅಲ್ಲ.. ಅದು ಸಿಟಿ ರವಿ ಹಾಗೂ ಅಶ್ವತ್ಥನಾರಾಯಣ್‌ರವರೇ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ರು. ಇದಕ್ಕೆ ತಿರುಗೇಟು ನೀಡಿದ ಸಿ.ಟಿ ರವಿ, ಚಿಕ್ಕಮಗಳೂರಿನಲ್ಲಿ ಮಾತನಾಡುತ್ತಾ, ನಾನು ಟಿಪ್ಪು ಕಾಲದಲ್ಲಿ ಬದುಕಿದ್ರೆ ಉರಿಗೌಡನಂತೆಯೇ ಹೋರಾಟ ಮಾಡುತ್ತಿದ್ದೆ . ಬೇರೆಯವರಿಗೆ ಗುಲಾಮರಾಗಿ ಬದುಕುವುದಕ್ಕಿಂತ ಉರಿಗೌಡ- ನಂಜೇಗೌಡ ಎಂದು ಕರೆಯಿಸಿಕೊಳ್ಳೋದು ಎಷ್ಟೋ ಉತ್ತಮ ಎಂದ್ರು.

ಹೆಚ್ಚಿನ ಸುದ್ದಿ

While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!