Saturday, March 15, 2025
Homeಕ್ರೈಂCRIME : ಯುವತಿಯೊಂದಿಗೆ ಅಕ್ರಮ ಸಂಬಂಧ ಆರೋಪ, ತೋಟದಲ್ಲಿ ಯುವಕನ ಬರ್ಬರ ಹತ್ಯೆ!

CRIME : ಯುವತಿಯೊಂದಿಗೆ ಅಕ್ರಮ ಸಂಬಂಧ ಆರೋಪ, ತೋಟದಲ್ಲಿ ಯುವಕನ ಬರ್ಬರ ಹತ್ಯೆ!

ಮೈಸೂರು : ಇನ್ಸ್​​​​ಸ್ಟಾಗ್ರಾಂ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ವಿವಾಹಿತ ಯುವಕನೋರ್ವನ ಬರ್ಬರ ಹತ್ಯೆಯಾಗಿದೆ.

ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿರುವ ತೋಟವೊಂದರಲ್ಲಿ ಈ ಕೊಲೆ ನಡೆದಿದ್ದು, ಸೂರ್ಯ ಎಂಬುವವನ ಭೀಕರ ಹತ್ಯೆ ಮಾಡಲಾಗಿದೆ.

ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು, ಹತನಾದ ಸೂರ್ಯನ ಪತ್ನಿ ಮತ್ತವರ ತಾಯಿ ಕೆಲ ದಿನಗಳ ಹಿಂದೆ ಮನೆಯನ್ನು ತೊರೆದಿದ್ದರು. ಇತ್ತೀಚೆಗೆ ಸೂರ್ಯ ಯುವತಿಯೊಂದಿಗಿನ ಸಂಬಂಧದ ಖಾಸಗಿ ಫೋಟೋವನ್ನು ವಾಟ್ಸಪ್​ ಸ್ಟೇಟಸ್​ ಇಟ್ಟಿದ್ದನಂತೆ.

ಅಲ್ಲದೇ ಮೃತ ಸೂರ್ಯನಿಗೆ ಹಣ ಮತ್ತು ಆಸ್ತಿ ನೀಡುವಂತೆ ಯುವತಿ ಪೀಡಿಸುತ್ತಿದ್ದಳು ಎನ್ನಲಾಗಿದೆ. ಕಳೆದ ರಾತ್ರಿ ಯುವತಿಯೊಂದಿಗೆ ತೋಟದಲ್ಲಿದ್ದ ಸೂರ್ಯ, ಇಂದು ಬೆಳಗಿನ ಜಾವ ಕೊಲೆಯಾಗಿದ್ದಾನೆ. ಕೊಲೆ ಹಿಂದೆ ಆ ಯುವತಿಯ ಕೈವಾಡವಿದೆ ಎಂದು ಸೂರ್ಯನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!