Monday, February 9, 2026
Homeಟಾಪ್ ನ್ಯೂಸ್MB Patil : “ಸಹಕಾರ” ಹೇಳಿಕೆ ತಿಕ್ಕಾಟ, ಸಿಎಂಗೆ ಕುಮಾರಸ್ವಾಮಿ ಭೇಟಿಯಾಗಲಿ ಎಂದ ಎಂ.ಬಿ.ಪಾಟೀಲ್!

MB Patil : “ಸಹಕಾರ” ಹೇಳಿಕೆ ತಿಕ್ಕಾಟ, ಸಿಎಂಗೆ ಕುಮಾರಸ್ವಾಮಿ ಭೇಟಿಯಾಗಲಿ ಎಂದ ಎಂ.ಬಿ.ಪಾಟೀಲ್!

ಬೆಂಗಳೂರು : ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಿನ್ನೆ ಗಂಭೀರ ಆರೋಪ ಮಾಡಿದ್ದರು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌, ಕುಮಾರಸ್ವಾಮಿ ಅವರು ಮೊದಲು ರಾಜ್ಯದ ಒಳಿತಾಗಿ ಯೋಚಿಸಿ ಮಾತನಾಡಬೇಕು. ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿದರೆ ಉತ್ತಮ ಎಂದು ಸಲಹೆ ನೀಡಿದರು.

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ವೇತನ ವಿಚಾರಕ್ಕೆ ರಾಜ್ಯ ಸರ್ಕಾರ ತಮ್ಮ ಜೊತೆ ಚರ್ಚೆ ಮಾಡಿಲ್ಲ. ನನ್ನ ತವರು ರಾಜ್ಯ ಎನ್ನುವ ಕಾರಣಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ರಾಜ್ಯದ ಹಿತ ದೃಷ್ಟಿಯಿಂದ ಬೆಂಗಳೂರಿಗೆ ಬಂದಾಗ ಅವರೇ ಖುದ್ದು ಸಿಎಂ ಅವರನ್ನು ಭೇಟಿ‌ ಮಾಡಬಹುದಲ್ವಾ ಎಂದು ಪಾಟೀಲರು ಪ್ರಶ್ನಿಸಿದರು.

ಇನ್ನು ನಾನೇ ನಮ್ಮ ಅಧಿಕಾರಿಗಳೊಂದಿಗೆ ದೆಹಲಿಗೆ ಹೋಗಿ ಭೇಟಿ ಮಾಡಿ ಕೆಲ ಸೆಮಿ‌ ಕಂಡಕ್ಟರ್ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದೆ. ಯಾರೂ ಭೇಟಿ ಮಾಡಿಲ್ಲ ಎಂಬ ಮಾತು ಸುಳ್ಳು ಎಂದು ಪಾಟೀಲರು ತಿರುಗೇಟು ನೀಡಿದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!