Saturday, January 25, 2025
Homeಟಾಪ್ ನ್ಯೂಸ್ನೀತಿ ಸಂಹಿತೆ ಜಾರಿ: ಮಠದ ಪಾಲಾಯ್ತು ಬಿಜೆಪಿ ತಯಾರಿಸಿದ ಆಹಾರ

ನೀತಿ ಸಂಹಿತೆ ಜಾರಿ: ಮಠದ ಪಾಲಾಯ್ತು ಬಿಜೆಪಿ ತಯಾರಿಸಿದ ಆಹಾರ

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಘೋಷಿಸುವುದರೊಂದಿಗೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ಲ್ಯಾನ್‌ ಮಾಡಿಕೊಂಡಿದ್ದ ರಾಜಕೀಯ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿದೆ.

ಗದಗ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನಕ್ಕೆ ನೀತಿ ಸಂಹಿತೆ ತೊಡಕಾಗಿದ್ದು, ಕಾರ್ಯಕರ್ತರಿಗೆಂದು ತಯಾರಿಸಿದ್ದ ಅಡುಗೆಯಲ್ಲಾ ಮಠದ ಪಾಲಾಗಿದೆ.

ನಗರದ ಅಂಬೇಡ್ಕರ್‌ ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವವರಿಗೆಂದು ಗೋಧಿ ಹುಗ್ಗಿ, ಮೊಸರನ್ನ, ಬದನೆಕಾಯಿ ಪಲ್ಲೆ, ಅನ್ನ ಸಾರು ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಊಟವನ್ನು ಸ್ಥಳೀಯ ಶ್ರೀ ಮಠಕ್ಕೆ ಪಕ್ಷ ರವಾನೆ ಮಾಡಿದೆ.

ಹೆಚ್ಚಿನ ಸುದ್ದಿ

error: Content is protected !!