Wednesday, February 19, 2025
Homeಕ್ರೈಂBREAKING NEWS : ಖಾಕಿ ಭರ್ಜರಿ ಬೇಟೆ, ಬ್ಯಾಂಕ್​ ದರೋಡೆ ಪ್ರಕರಣದಲ್ಲಿ ಮೂವರು ಅರೆಸ್ಟ್​!

BREAKING NEWS : ಖಾಕಿ ಭರ್ಜರಿ ಬೇಟೆ, ಬ್ಯಾಂಕ್​ ದರೋಡೆ ಪ್ರಕರಣದಲ್ಲಿ ಮೂವರು ಅರೆಸ್ಟ್​!

ದಕ್ಷಿಣ ಕನ್ನಡ : ಮಂಗಳೂರಿನ ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್​​ ದರೋಡೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕಮಿಷನರ್​​​ ಅನುಪಮ್ ಅಗರ್ವಾಲ್​ ಅವರು, ಬಂಧಿತರಿಂದ 2 ಗೋಣಿ ಚೀಲ, ತಲ್ವಾರ್​​, 2 ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಇನ್ನಿತರ ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ. ದರೋಡೆ ಮಾಡಿದ ನಂತರ ಆರೋಪಿಗಳು ಕೇರಳ ಮೂಲಕ ತಮಿಳುನಾಡಿನ ತಿರುವನ್ವೇಲಿಗೆ ತೆರಳಿದ್ದರು ಎಂದು ಕಮಿಷನರ್​ ಹೇಳಿದರು.

ಜ.17ರಂದು ಕೆ.ಸಿ.ರೋಡ್ ಶಾಖೆಯ ಕೋಟೆಕಾರ್​​​​ ಬ್ಯಾಂಕ್​​ಗೆ​​ ನುಗ್ಗಿದ್ದ ಐವರು ದರೋಡೆಕೋರರು, ಬರೋಬ್ಬರಿ ರೂ.12 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದರು. ಫಿಯಟ್​​​ ಖಾರಿನ್ನಲ್ಲಿ ಕದ್ದ ಮಾಲನ್ನು ಚೀಲದಲ್ಲಿ ತುಂಬಿಕೊಂಡು ಎಸ್ಕೇಪ್​ ಆಗಿದ್ದರು. ಮಹಾರಾಷ್ಟ್ರದ ಕಾರನ್ನು ಬಳಸಿ ಖದೀಮರು ದರೋಡೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್ಚಿನ ಸುದ್ದಿ

error: Content is protected !!