ನವದೆಹಲಿ : ವಿಧಾನಸಭಾ ಚುನಾವಣೆ ಕಾವು ಪಡೆದುಕೊಂಡಿದ್ದು, ಇಂದು ಮನೆ ಮನೆಗೆ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಬೆಂಗಾವಲು ಪಡೆಯ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿದುಬಂದಿದೆ.
Stone Pelting on Arvind Kejriwal’s Car During Delhi Campaign
🔴AAP claims goons from Pravesh Verma’s camp are behind the attack.
🔴The video, released by AAP, shows a stone landing on Kejriwal’s car, while others wave black flags. #DelhiElection2025 #DelhiPolitics… pic.twitter.com/KiU8hkG56V
— Sneha Mordani (@snehamordani) January 18, 2025
ಕೆಲ ಬಿಜೆಪಿಯ ಕಾರ್ಯಕರ್ತರೇ ಹೀಗೇ ಮಾಡಿದ್ದಾರೆಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ. ಪ್ರಚಾರದ ವೇಳೆ ಕೇಜ್ರಿವಾಲ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಕಾರಿನ ಮೇಲೆ ಕಲ್ಲು ಎಸೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಘಟನೆಯ ವೀಡಿಯೊವನ್ನು ಎಎಪಿ ಬಿಡುಗಡೆ ಮಾಡಿದ್ದು, ಬೆಂಗಾವಲು ಪಡೆಯ ಬಳಿ ಕೆಲ ವ್ಯಕ್ತಿಗಳು ಕಪ್ಪು ಬಾವುಟಗಳನ್ನು ಬೀಸುತ್ತಿರುವುದನ್ನು ವೀಡಿಯೊದಲ್ಲಿ ಸೆರೆಯಾಗಿದೆ. ಈ ದಾಳಿ ಪ್ರಚಾರವನ್ನು ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿದೆ ಎಂದು ಎಎಪಿ ಆಪಾದಿಸಿದೆ.