Sunday, April 19, 2026
Homeದೇಶಬಿಜೆಪಿ ಅನಿಲ್ ನನ್ನು ಬಳಸಿ ಎಸೆಯಲಿದೆ: ಎಕೆ ಆಂಟನಿ ಕಿರಿಯ ಪುತ್ರ ಅಜಿತ್

ಬಿಜೆಪಿ ಅನಿಲ್ ನನ್ನು ಬಳಸಿ ಎಸೆಯಲಿದೆ: ಎಕೆ ಆಂಟನಿ ಕಿರಿಯ ಪುತ್ರ ಅಜಿತ್

ನವದೆಹಲಿ: ಕಾಂಗ್ರೆಸ್ ಜೊತೆಗಿನ ಎಲ್ಲಾ ಸಂಬಂಧವನ್ನು ಮುರಿದುಕೊಂಡು ಅನಿಲ್ ಆಂಟನಿ ಬಿಜೆಪಿಗೆ ಸೇರಿದ ಒಂದು ದಿನದ ನಂತರ, ಎಕೆ ಆಂಟನಿ ಅವರ ಕಿರಿಯ ಮಗ ಅಜಿತ್ ಶುಕ್ರವಾರ ತಮ್ಮ ಸಹೋದರನ ನಿರ್ಧಾರವು ಆತುರದ ನಿರ್ಧಾರವಾಗಿತ್ತು ಮತ್ತು ಕೇಸರಿ ಪಕ್ಷವು ಅವರನ್ನು ತಾತ್ಕಾಲಿಕವಾಗಿ ಬಳಸಿದ ನಂತರ ಎಸೆಯಲಿದೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಆಂಟನಿ, ಅನಿಲ್ ತಮ್ಮ ನಿರ್ಧಾರದ ಬಗ್ಗೆ ಕುಟುಂಬಕ್ಕೆ ಕಿಂಚಿತ್ತೂ ಸುಳಿವು ನೀಡಿಲ್ಲ, ಮತ್ತು ಗುರುವಾರದ ಬೆಳವಣಿಗೆಯ ಬಗ್ಗೆ ತಿಳಿದು ಕುಟುಂಬಕ್ಕೆ ಆಘಾತವಾಗಿದೆ‌ ಎಂದರು.

“ತಂದೆ (ಎ ಕೆ ಆಂಟನಿ) ಮನೆಯ ಒಂದು ಮೂಲೆಯಲ್ಲಿ ಅತ್ಯಂತ ನೋವಿನಿಂದ ಕುಳಿತಿರುತ್ತಾರೆ. ನನ್ನ ಜೀವನದಲ್ಲಿ ಅವರನ್ನು ಈ ರೀತಿ ದುರ್ಬಲನಾಗಿ ನೋಡಿಲ್ಲ. ಅವರು ಕಣ್ಣೀರು ಹಾಕಿಲ್ಲ, ಅಷ್ಟೇ’ ಎಂದು ಅಜಿತ್ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!