ಬೆಂಗಳೂರು : ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣಿ ಕೇಸ್ ಇಡೀ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ಕಾಂಗ್ರೆಸ್ ಸಚಿವರ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವುದರ ನಡುವೆಯೇ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಮಗೆ ಅಡ್ಡ ಬಂದವರಿಗೆ ಸಿಎಂ ಕುರ್ಚಿ ಆಕಾಂಕ್ಷಿಯಾಗಿದ್ದವರು ಸೆಟಲ್ಮೆಂಟ್ ಮಾಡ್ತಾರೆ. ರನ್ಯಾ ರಾವ್ ಪ್ರಕರಣದಲ್ಲೂ ಇಬ್ಬರ ಸಚಿವರ ಸೆಟಲ್ಮೆಂಟ್ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪರೋಕ್ಷವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಯೋಗೇಶ್ವರ್ ಅವರದ್ದು ಸೆಟಲ್ಮೆಂಟ್ ಆದಂತೆ, ಅದೇ ರೀತಿ ನಂದೂ ಸೆಟಲ್ಮೆಂಟ್ ಆಯ್ತು. ರಮೇಶ್ ಜಾರಕಿಹೊಳಿ, ರೇವಣ್ಣಂದು ಆಗೋಯ್ತು. ಈಗ ಇನ್ನಿಬ್ಬರ ಸಚಿವರ ಸೆಟಲ್ಮೆಂಟ್ ಆಗುವುದು ಬಾಕಿ ಇದೆ. ಅದು ಸದ್ಯದಲ್ಲೇ ಗೊತ್ತಾಗಲಿದೆ.
ಯಾವ ರೀತಿ ಸೆಟಲ್ಮೆಂಟ್ ಮಾಡಿದ್ದಾರೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ, ಕಾದು ನೋಡೋಣ. ನನಗೂ ಸೆಟಲ್ಮೆಂಟ್ ಆಗಿದೆ ಅಂತಾ ಆದ ಮೇಲೆಯೇ ಅನುಭವಕ್ಕೆ ಬಂತು. ಇನ್ನು ಇನ್ಯಾರಿಗೆ ಆಗೋದಿದೆ ಸೆಟಲ್ಮೆಂಟ್ ಅದು ಆಗಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.