ನವದೆಹಲಿ : ಜಮ್ಮು ಸೇರಿದಂತೆ, ಪಂಜಾಬ್, ಜೈಸಲ್ಮೇರ್ನಲ್ಲಿ ಪಾಕ್ ಅಪ್ರಚೋದಿತ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತ… ಕಟ್ಟ ಕಡೆಯ ವಾರ್ನಿಂಗ್ ಅನ್ನು ಪಾಕಿಸ್ತಾನಕ್ಕೆ ನೀಡಿದೆ.
ಯುದ್ಧದ ಪ್ರಚೋದನೆ ಈ ಕ್ಷಣದಿಂದಲೇ ನಿಲ್ಲಿಸದಿದ್ದರೆ… ಉಸಿರಾಡುವುದಕ್ಕೂ ಅವಕಾಶ ನೀಡಲ್ಲ.. ತಕ್ಕ ಉತ್ತರ ನೀಡುತ್ತೇವೆ ಎಂದು ಗಂಭೀರ ಎಚ್ಚರಿಕೆಯನ್ನು ಪಾಪಿ ಪಾಕ್ಗೆ ಕೊಟ್ಟಿದೆ.
ಕ್ಷಿಪಣಿ, ಡ್ರೋನ್ ದಾಳಿ ನಿಲ್ಲಿಸದಿದ್ದರೆ ನಿಮ್ಮ ಕಥೆ ಅಷ್ಟೇ ಎಂಬಂತೆ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಸಂದೇಶ ರವಾನಿಸಿದ್ದಾರೆ. ಇದೇ ನಿಮಗೆ ಕೊನೆಯ ಎಚ್ಚರಿಕೆ. ನೀವು ಮಾಡಿರುವ ದಾಳಿಗೆ ಪ್ರತ್ಯುತ್ತರ ಕೊಡ್ತೇವೆ… ಯೋಚಿಸಿ ಎಂದಿದ್ದಾರೆ.