Thursday, May 22, 2025
Homeಟಾಪ್ ನ್ಯೂಸ್Actor Darshan : ಪತ್ನಿ, ಪುತ್ರನ ಜೊತೆಯಲ್ಲಿ ದೀಪಾವಳಿ - ದರ್ಶನ್‌ ಇಂದು ಆಸ್ಪತ್ರೆಗೆ ದಾಖಲು?

Actor Darshan : ಪತ್ನಿ, ಪುತ್ರನ ಜೊತೆಯಲ್ಲಿ ದೀಪಾವಳಿ – ದರ್ಶನ್‌ ಇಂದು ಆಸ್ಪತ್ರೆಗೆ ದಾಖಲು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದು, ಇಂದು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ. ಅ.31 ಪುತ್ರ ವಿನೀಶ್‌ ಜನ್ಮದಿನವಿತ್ತು. ಬುಧವಾರವೇ ಜೈಲಿನಿಂದ ಹೊರಬಿದ್ದಿದ್ದ ದರ್ಶನ್‌ ನಿನ್ನೆಯಿಡೀ ಕುಟುಂಬದ ಜೊತೆಗೆ ಕಳೆದಿದ್ದು, ಇಂದು ಚಿಕಿತ್ಸೆಗಾಗಿ ತೆರಳಲಿದ್ದಾರೆನ್ನಲಾಗಿದೆ.

ಜೈಲಿನಲ್ಲಿ ಬೆನ್ನುನೋವಿನಿಂದ ದರ್ಶನ್‌ ನರಳುತ್ತಿದ್ದಾರೆಂದು ಅವರ ಪರ ವಕೀಲರು ವಾದಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಹೊಸಕೆರೆಹಳ್ಳಿಯಲ್ಲಿರುವ ಪತ್ನಿಯ ಅಪಾರ್ಟ್‌ಮೆಂಟ್‌ ನಲ್ಲಿ ಸಧ್ಯ ವಾಸ್ತವ್ಯ ಹೂಡಿರುವ ದರ್ಶನ್‌ ಭೇಟಿಗೆ ಅಭಿಮಾನಿಗಳು ಕಿಕ್ಕಿರಿದಿದ್ದಾರೆ. ಹೀಗಾಗಿ ದರ್ಶನ್‌ ಹಾಗೂ ಪತ್ನಿ ವಿಜಯಲಕ್ಷ್ಮಿ ನಿವಾಸದ ಸುತ್ತಲೂ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!