Saturday, May 16, 2026
Homeಕ್ರೈಂSHOCKING : ಕಲುಷಿತ ನೀರು ಸೇವಿಸಿ 20 ಜನ ಅಸ್ವಸ್ಥ - ಆಸ್ಪತ್ರೆಗೆ ದಾಖಲು 

SHOCKING : ಕಲುಷಿತ ನೀರು ಸೇವಿಸಿ 20 ಜನ ಅಸ್ವಸ್ಥ – ಆಸ್ಪತ್ರೆಗೆ ದಾಖಲು 

ವಿಜಯನಗರ : ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲು ತಾಲೂಕಿನ ಮಾನ್ಯರ ಮಸಲವಾಡದಲ್ಲಿ ನಡೆದಿದೆ.

ಚರಂಡಿ ಮಿಶ್ರಿತ ಬೋರ್ ವೆಲ್ ನೀರು ಕುಡಿದು 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ವಾಂತಿ ಭೇದಿಯಿಂದ ಬಳಲುತ್ತಿರುವವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಅಸ್ವಸ್ಥಗೊಂಡ ಎಲ್ಲರ ಸ್ಥಿತಿ ಸ್ಥಿರವಾಗಿದ್ದು, ಘಟನೆಯ ಹಿನ್ನಲೆ ಗ್ರಾಮದ ಜನರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!