ಲಕ್ನೋ: ಇದೇ ತಿಂಗಳ 23ರಂದು 155 ದೇಶಗಳ ನದಿ ನೀರಿನಿಂದ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿಗೆ ಅಭಿಷೇಕ ನಡೆಯಲಿದೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಈ ವಿಶೇಷ ಅಭಿಷೇಕವನ್ನು ನಡೆಸಲಿದ್ದಾರೆ.
ದೆಹಲಿ ಮೂಲದ ವಿಜಯ್ ಎಂಬವರು 155 ದೇಶಗಳ ನದಿ ನೀರು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕೆಲಸ ಮುಂದುವರಿದಿದ್ದು, 2024ರ ಜನವರಿಯಲ್ಲಿ ಗರ್ಭಗುಡಿಯನ್ನ ಜನರ ದರ್ಶನಕ್ಕೆ ತೆರೆಯುವ ಸಾಧ್ಯತೆ ಇದೆ.